ಒಬ್ಬ ಬಾಲುರಾಯರು ಬಹಳಷ್ಟು ಬರೆದಿರೋದು ಸೂರ್ಯನ್ಮೇಲೆ
ಸರಿ, ಆದರೆ ಬಹಳಷ್ಟು ಜನ ಬರಹಗಾರರು ಬರೇದಿರೋದೇನಿದ್ರೂ ನನ್ಮೇಲೆ
ಬರೀ ಪ್ರೇಮ, ಪ್ರಣಯ, ಚಾಂದು, ಚಂದ್ರಾಂತ ಒದ್ದಾಡಿ
ಒದರೋ ಸನಿಮಾದೋರು, ಚಿಲ್ಲರೆ ಕವಿಗಳ ಸಮಾಚಾರಾ
ಅಲ್ರಿ ನಾನು ಹೇಳ್ತಿರೋದು, ಇಲ್ಲಿ ಸ್ವಲ್ಪ ಕೇಳ್ರಿ, ಕುವೆಂಪು
ಮಹಾಕವಿ ಕುವೆಂಪು, ಗೊತ್ತು ತಾನೇ ಹೆಸರೇ ನೋಡಿ ಕೇಳುವುದಕ್ಕೆ
ಎಷ್ಟು ಇಂಪು:
ಅವರ ಕಾವ್ಯದ ವಿಷಯಕ್ಕೆ ಬೇಕಿದ್ರೆ ಬರೋಣ ಮತ್ತೆ
ನನಗೆ ಸರಿಯಾಗಿ ನೆನಪಿಲ್ಲ ಯಾವುದೂಂತ ಇಸವಿ,
ಅವರ ಹಿರೇಮಗ ಹುಟ್ಟಿದಾಗ ಅವನಿಗೆ ಅವರಿಟ್ಟ ಹೆಸರೇನು ಗೊತ್ತೆ?
ಚಾರು ಚಂದ್ರ ಚಕೋರ, ಪೂರ್ಣಚಂದ್ರ ತೇಜಸ್ವಿ.
*****
Related Post
ಸಣ್ಣ ಕತೆ
-
ಎರಡು ರೆಕ್ಕೆಗಳು
ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…